SSF ಜಾಲ್ಸೂರು ಸೆಕ್ಟರ್ ಹಾಗೂ SSF ಸುಣ್ಣಮೂಲೆ ಶಾಖೆ ಇದರ ಜಂಟಿ ಆಶ್ರಯದಲ್ಲಿ ಶೈಖ್ ರಿಫಾಯೀ ಅನುಸ್ಮರಣೆ ಹಾಗೂ ನಮ್ಮನ್ನಗಳಿದ SSF ಕಾರ್ಯಕರ್ತ ಖಲಂದರ್ ಮಾಂಬ್ಳಿಯವರ ಮೇಲೆ ತಹ್ಲೀಲ್ ಸಮರ್ಪಣೆ ಮತ್ತು SSF ನಾಯಕರಿಗೆ ಸನ್ಮಾನ ಕಾರ್ಯಕ್ರಮವು ಅಹಮದುಲ್ ಬದವೀ ಜುಮಾ ಮಸೀದಿ ಸುಣ್ಣಮೂಲೆಯಲ್ಲಿ ನಡೆಯಿತು. ಸುಣ್ಣಮೂಲೆ ಖತೀಬ್ ಅಬ್ದುಲ್ ಕರೀಂ ಸಖಾಫಿ ದುಆ ನೆರವೇರಿಸಿ,SSF ಸುಳ್ಯ ಡಿವಿಷನ್ ಕ್ಯಾಂಪಸ್ ಚೈರ್ಮೇನ್ ಫೈಝಲ್ ಝುಹ್ರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ದಾರುಲ್ ಇಹ್ಸಾನ್ ಬದಿಯಡ್ಕ ಇದರ ಸಾರಥಿ ಬಶೀರ್ ಸಖಾಫಿ ಕೊಲ್ಯಂ ಅನುಸ್ಮರಣಾ ಪ್ರಭಾಷಣಗೈದರು.SSF ರಾಜ್ಯ ಸದಸ್ಯರಾದ ಅಬ್ದುರ್ರಹ್ಮಾನ್ ಮೊಗರ್ಪಣೆ ಮತ್ತು SSF ದ.ಕ.ಜಿಲ್ಲಾ ಸದಸ್ಯರಾದ ಕಬೀರ್ ಜಟ್ಟಪಳ್ಳ ಶುಭಾರೈಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ SYS ಸುಳ್ಯ ಸೆಂಟರ್ ಅದ್ಯಕ್ಷ ಅಶ್ರಫ್ ಸಅದಿ, ಕಾರ್ಯದರ್ಶಿ ಹಮೀದ್ ಸುಣ್ಣಮೂಲೆ, ಸುಣ್ಣಮೂಲೆ ಜಮಾಅತ್ ಅಧ್ಯಕ್ಷರಾದ ಮಹಮ್ಮದ್ ಪಿ.ಎ.,SYS ಸುಣ್ಣಮೂಲೆ ಬ್ರಾಂಚ್ ಅದ್ಯಕ್ಷ ಅಬ್ದುರ್ರಹ್ಮಾನ್ ಸಅದಿ, ಅಡ್ವಕೇಟ್ ಅಬೂಬಕ್ಕರ್ ಅಡ್ಕಾರು,ಕಯಬು ಕೇನಾಜೆ,ಕೆ.ಸಿ.ಎಫ್.ಸದಸ್ಯರಾದ ಅಬ್ದುರ್ರಝಾಕ್ ಹಾಜಿ ಇರುವಂಬಳ್ಳ, ಮಹಮ್ಮದ್ ಅಲಿ ಮಂಡೆಕೋಲು, ಮುಕ್ತಾರ್ ಮೇನಾಲ, SSF ಸುಳ್ಯ ಡಿವಿಷನ್ ಕೋಶಾಧಿಕಾರಿ ಅಬ್ದುರ್ರಝಾಕ್ ಅಲೆಕ್ಕಾಡಿ,ಸಿದ್ದೀಕ್ ಎಲಿಮಲೆ,ಅಂದುಂಞಿ ಗೋರಡ್ಕ , ಬಿ.ಜೆ.ಎಂ ಇರುವಂಬಳ್ಳ ಇದರ ಅಧ್ಯಕ್ಷರಾದ ಅಬೂಬಕರ್ ಐ.ಎಂ, SSF ಸುಣ್ಣಮೂಲೆ ಶಾಖೆ ಅದ್ಯಕ್ಷ ಶರೀಫ್ ಎ.ಕೆ, ಸೆಕ್ಟರ್ ಉಪಾದ್ಯಕ್ಷ ಲತೀಫ್ ಸಅದಿ ಮಂಡೆಕೋಲು ಮುಂತಾದ ನಾಯಕರು ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು. SSF ರಾಜ್ಯ ಸದಸ್ಯರಾಗಿ ಆಯ್ಕೆಯಾದ ಅಬ್ದುರ್ರಹ್ಮಾನ್ ಮೊಗರ್ಪಣೆ ಮತ್ತು SSF ದ.ಕ.ಜಲ್ಲಾ ಸದಸ್ಯರಾಗಿ ಆಯ್ಕೆಯಾದ ಕಬೀರ್ ಜಟ್ಟಿಪಳ್ಳ ಇವರನ್ನು ಸನ್ಮಾನಿಸಲಾಯಿತು. SSF ಸೆಕ್ಟರ್ ಸಮಿತಿಯಲ್ಲಿದ್ದು ಇದೀಗ SYS ಗೆ ಪಾದರ್ಪನೆ ಗೈದ SSF ಜಾಲ್ಸೂರ್ ಸೆಕ್ಟರ್ ಇದರ ಮಾಜಿ ಕಾರ್ಯದರ್ಶಿ ಮಜೀದ್ ಸುಣ್ಣಮೂಲೆ ಮತ್ತು SSF ಸುಳ್ಯ ಡಿವಿಷನ್ ಮಾಜಿ ಅಧ್ಯಕ್ಷರು ಮುಹಮ್ಮದ್ ಮುಸ್ಲಿಯಾರ್ ಮಂಡೆಕೋಲು ಇವರನ್ನು ಬೀಳ್ಕೊಡಲಾಯಿತು. ನಾಸರ್ ಬಾ ಹಸನಿ ಸ್ವಾಗತಿಸಿ ಸಲಾಂ ಝುಹ್ರಿ ವಂದಿಸಿದರು ಅಬ್ಬಾಸ್ ಎ.ಬಿ.ಕಾರ್ಯಕ್ರಮವನ್ನು ನಿರೂಪಿಸಿದರು.
Sunday, 26 February 2017
ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ ಪೆಡರೇಷನ್ (ರಿ) SSF ಜಾಲ್ಸೂರು ಸೆಕ್ಟರ್ ಮತ್ತು SSF ಸುಣ್ಣಮೂಲೆ ಶಾಖೆ ಇದರ ವತಿಯಿಂದ ರಿಫಾಯೀ ಅನುಸ್ಮರಣೆ ಹಾಗೂ ತಹ್ಲೀಲ್ ಸಮರ್ಪಣೆ ಮತ್ತು ಸನ್ಮಾನ ಕಾರ್ಯಕ್ರಮ
Labels:
SUNNI NEWS
Subscribe to:
Post Comments (Atom)
No comments:
Post a Comment