Sunday, 26 February 2017

ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ ಪೆಡರೇಷನ್ (ರಿ) SSF ಜಾಲ್ಸೂರು ಸೆಕ್ಟರ್ ಮತ್ತು SSF ಸುಣ್ಣಮೂಲೆ ಶಾಖೆ ಇದರ ವತಿಯಿಂದ ರಿಫಾಯೀ ಅನುಸ್ಮರಣೆ ಹಾಗೂ ತಹ್ಲೀಲ್ ಸಮರ್ಪಣೆ ಮತ್ತು ಸನ್ಮಾನ ಕಾರ್ಯಕ್ರಮ


SSF ಜಾಲ್ಸೂರು ಸೆಕ್ಟರ್ ಹಾಗೂ SSF ಸುಣ್ಣಮೂಲೆ ಶಾಖೆ ಇದರ ಜಂಟಿ ಆಶ್ರಯದಲ್ಲಿ ಶೈಖ್ ರಿಫಾಯೀ ಅನುಸ್ಮರಣೆ ಹಾಗೂ ನಮ್ಮನ್ನಗಳಿದ SSF ಕಾರ್ಯಕರ್ತ ಖಲಂದರ್ ಮಾಂಬ್ಳಿಯವರ ಮೇಲೆ ತಹ್ಲೀಲ್ ಸಮರ್ಪಣೆ ಮತ್ತು SSF ನಾಯಕರಿಗೆ ಸನ್ಮಾನ ಕಾರ್ಯಕ್ರಮವು ಅಹಮದುಲ್ ಬದವೀ ಜುಮಾ ಮಸೀದಿ ಸುಣ್ಣಮೂಲೆಯಲ್ಲಿ ನಡೆಯಿತು. ಸುಣ್ಣಮೂಲೆ ಖತೀಬ್ ಅಬ್ದುಲ್ ಕರೀಂ ಸಖಾಫಿ ದುಆ ನೆರವೇರಿಸಿ,SSF ಸುಳ್ಯ ಡಿವಿಷನ್ ಕ್ಯಾಂಪಸ್ ಚೈರ್ಮೇನ್ ಫೈಝಲ್ ಝುಹ್ರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ದಾರುಲ್ ಇಹ್ಸಾನ್ ಬದಿಯಡ್ಕ ಇದರ ಸಾರಥಿ ಬಶೀರ್ ಸಖಾಫಿ ಕೊಲ್ಯಂ ಅನುಸ್ಮರಣಾ ಪ್ರಭಾಷಣಗೈದರು.SSF ರಾಜ್ಯ ಸದಸ್ಯರಾದ ಅಬ್ದುರ್ರಹ್ಮಾನ್ ಮೊಗರ್ಪಣೆ ಮತ್ತು SSF ದ.ಕ.ಜಿಲ್ಲಾ ಸದಸ್ಯರಾದ ಕಬೀರ್ ಜಟ್ಟಪಳ್ಳ ಶುಭಾರೈಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ SYS ಸುಳ್ಯ ಸೆಂಟರ್ ಅದ್ಯಕ್ಷ ಅಶ್ರಫ್ ಸಅದಿ, ಕಾರ್ಯದರ್ಶಿ ಹಮೀದ್ ಸುಣ್ಣಮೂಲೆ, ಸುಣ್ಣಮೂಲೆ ಜಮಾಅತ್ ಅಧ್ಯಕ್ಷರಾದ ಮಹಮ್ಮದ್ ಪಿ.ಎ.,SYS ಸುಣ್ಣಮೂಲೆ ಬ್ರಾಂಚ್ ಅದ್ಯಕ್ಷ ಅಬ್ದುರ್ರಹ್ಮಾನ್ ಸಅದಿ, ಅಡ್ವಕೇಟ್ ಅಬೂಬಕ್ಕರ್ ಅಡ್ಕಾರು,ಕಯಬು ಕೇನಾಜೆ,ಕೆ.ಸಿ.ಎಫ್.ಸದಸ್ಯರಾದ ಅಬ್ದುರ್ರಝಾಕ್ ಹಾಜಿ ಇರುವಂಬಳ್ಳ, ಮಹಮ್ಮದ್ ಅಲಿ ಮಂಡೆಕೋಲು, ಮುಕ್ತಾರ್ ಮೇನಾಲ, SSF ಸುಳ್ಯ ಡಿವಿಷನ್ ಕೋಶಾಧಿಕಾರಿ ಅಬ್ದುರ್ರಝಾಕ್ ಅಲೆಕ್ಕಾಡಿ,ಸಿದ್ದೀಕ್ ಎಲಿಮಲೆ,ಅಂದುಂಞಿ ಗೋರಡ್ಕ , ಬಿ.ಜೆ.ಎಂ ಇರುವಂಬಳ್ಳ ಇದರ ಅಧ್ಯಕ್ಷರಾದ ಅಬೂಬಕರ್ ಐ.ಎಂ, SSF ಸುಣ್ಣಮೂಲೆ ಶಾಖೆ ಅದ್ಯಕ್ಷ ಶರೀಫ್ ಎ.ಕೆ, ಸೆಕ್ಟರ್ ಉಪಾದ್ಯಕ್ಷ ಲತೀಫ್ ಸಅದಿ ಮಂಡೆಕೋಲು ಮುಂತಾದ ನಾಯಕರು ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು. SSF ರಾಜ್ಯ ಸದಸ್ಯರಾಗಿ ಆಯ್ಕೆಯಾದ ಅಬ್ದುರ್ರಹ್ಮಾನ್ ಮೊಗರ್ಪಣೆ ಮತ್ತು SSF ದ.ಕ.ಜಲ್ಲಾ ಸದಸ್ಯರಾಗಿ ಆಯ್ಕೆಯಾದ ಕಬೀರ್ ಜಟ್ಟಿಪಳ್ಳ ಇವರನ್ನು ಸನ್ಮಾನಿಸಲಾಯಿತು. SSF ಸೆಕ್ಟರ್ ಸಮಿತಿಯಲ್ಲಿದ್ದು ಇದೀಗ SYS ಗೆ ಪಾದರ್ಪನೆ ಗೈದ SSF ಜಾಲ್ಸೂರ್ ಸೆಕ್ಟರ್ ಇದರ ಮಾಜಿ ಕಾರ್ಯದರ್ಶಿ ಮಜೀದ್ ಸುಣ್ಣಮೂಲೆ ಮತ್ತು SSF ಸುಳ್ಯ ಡಿವಿಷನ್ ಮಾಜಿ ಅಧ್ಯಕ್ಷರು ಮುಹಮ್ಮದ್ ಮುಸ್ಲಿಯಾರ್ ಮಂಡೆಕೋಲು ಇವರನ್ನು ಬೀಳ್ಕೊಡಲಾಯಿತು. ನಾಸರ್ ಬಾ ಹಸನಿ ಸ್ವಾಗತಿಸಿ ಸಲಾಂ ಝುಹ್ರಿ ವಂದಿಸಿದರು ಅಬ್ಬಾಸ್ ಎ.ಬಿ.ಕಾರ್ಯಕ್ರಮವನ್ನು ನಿರೂಪಿಸಿದರು.

SSF ಗಾಂಧಿನಗರ ಶಾಖಾ ವತಿಯಿಂದ ತಹ್ಲೀಲ್ ಸಮರ್ಪಣೆ

🕋 _ಎಸ್ಸೆಸ್ಸೆಫ್ ಗಾಂಧಿನಗರ ಶಾಖಾ ಕಾರ್ಯದರ್ಶಿ ಶವಾದ್ ಮುಹಮ್ಮದ್ ತಂದೆಯ ಹೆಸರಿನಲ್ಲಿ_ *ತಹ್ಲೀಲ್ ಸಮರ್ಪಣೆ ಮತ್ತು ಯಾಸೀನ್ ಪಾರಾಯಣ* ದಿನಾಂಕ _27/02/2017_ ರಂದು _(ಇಂದು)ಇಶಾ ನಮಾಝಿನ_ ಬಳಿಕ ಅವರ ಮನೆಯಲ್ಲಿ ನಡೆಯಲಿದೆ..,
*ಎಲ್ಲಾ ಸಂಘ ಕುಟುಂಬ ನಾಯಕರು, ಕಾರ್ಯಕರ್ತರು, ದೀನೀ ಸ್ನೇಹಿಗಳು ಭಾಗವಹಿಸಬೇಕಾಗಿ ವಿನಂತಿ*..,

_🇸🇱 ಎಸ್ಸೆಸ್ಸೆಫ್ ಗಾಂಧಿನಗರ ಶಾಖೆ_

Friday, 17 February 2017

SSF ಹಾಗು SYS ಮಂಡೆಕೋಲು ಗುರುವಮೊಟ್ಟೆ ಶಾಖಾ ವತಿಯಿಂದ ಅನುಸ್ಮರಣಾ ಕಾರ್ಯಕ್ರಮ

SYS ಹಾಗು SSF ಗುರುವಮೊಟ್ಟೆ ಮಂಡೇಕೋಲು ಶಾಖಾ ವತಿಯಿಂದ ಅನುಸ್ಮರಣಾ ಕಾರ್ಯಕ್ರಮವು ಫೆಬ್ರವರಿ 14 ರಂದು ಮರ್ಹೂಂ ಪೋಕರ್ ಕುಂಞಿ ವೇದಿಕೆ ಗುರುವಮೊಟ್ಟೆಯಲ್ಲಿ ನಡೆಯಿತು. SYS ಬ್ರಾಂಚ್ ಅಧ್ಯಕ್ಷರಾದ ಅಬ್ದುಲ್ಲ ಸಖಾಪಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಂ ಇಯತುಲ್ ಉಲಮಾ ಸುಳ್ಯ ತಾಲೂಕು ಅಧ್ಯಕ್ಷರಾದ ಸೈಯದ್  ಕುಂಞಿ ಕೊಯ ಸಅದಿ ತಂಙಲ್ ಉದ್ಘಾಟಿಸಿದರು.
SSF ಕಾಸರಗೋಡು ಜಿಲ್ಲಾ ಅಧ್ಯಕ್ಷರಾದ ಪಾತೂರ್ ಅಬ್ದುಲ್ ಜಬ್ಬಾರ್ ಸಖಾಫಿ ಮುಖ್ಯಪ್ರಭಾಷಣ ಗೈದರು.
ಝೈನುಲ್ ಆಬಿದೀನ್ ಮುತ್ತುಕೋಯ ತಂಙಳ್ ಕಣ್ಣವಂ ಪ್ರಾರ್ಥನೆ ನಿರ್ವಹಿಸಿದರು.
ಹಾರಿಸ್ ಮಿಸ್ಬಾಹಿ ಪೈಂಬಚ್ಚಾಲ್ ಪ್ರಾಸ್ತಾವಿಕ ಭಾಷಣ ಗೈದರು.SYS ಮುಳ್ಳೇರಿಯ ಝೋನ್ ಕಾರ್ಯದರ್ಶಿ ಅಬ್ದುಲ್ ರಜಾಕ್ ಸಖಾಪಿ, ಗುರುವಮೊಟ್ಟೆ ಮಾಜಿ ಖತೀಬ್ ರಪೀಕ್ ಸಖಾಫಿ ಮಯ್ಯಲ ಶುಭ ಅರೈಸಿ ಮಾತನಾಡಿದರು. ಹುಸೈನ್ ತಂಙಲ್ ಆದೂರ್, ಜಿಎಸ್ ಅಬ್ದುಲ್ ಕಾದರ್ ಸಅದಿ ಎ.ಬಿ ಅಶ್ರಪ್ ಸಅದಿ, ಅಬ್ದುಲ್ ಲತೀಪ್ ಸಖಾಫಿ, ನಾಸರ್ ಬಾಹಸನಿ, ಅಬ್ದುಲ್ ಹಮೀದ್ ಸುಣ್ಣಮೂಲೆ, ಸಿದ್ದೀಕ್ ಕಟ್ಟೆಕಾರ್ಸ್ ಉಪಸ್ಥಿತರಿದ್ದರು.ಶಾಖಾ ಅಧ್ಯಕ್ಷರು ಲತೀಪ್ ಸಖಾಫಿ ಸ್ವಾಗತಿಸಿ ಅಶ್ರಪ್ ಜೌಹರಿ ವಂದಿಸಿದರು.
ಜಿ.ಕೆ ಇಬ್ರಾಹಿಂ ಅಂಜದಿ ಕಾರ್ಯಕ್ರಮವನ್ನು ನಿರೂಪಿಸಿದರು.

Thursday, 16 February 2017

SSF ಇರುವಂಬಳ್ಳ ಶಾಖಾ ವತಿಯಿಂದ ರಿಪಾಯಿ ಅನುಸ್ಮರಣೆ ಕಾರ್ಯಕ್ರಮ

SSF ಇರುವಂಬಳ್ಳ ಶಾಖಾ ವತಿಯಿಂದ ಶೈಖ್ ರಿಫಾಯಿ ಅನುಸ್ಮರಣೆ ಹಾಗು ನಮ್ಮನ್ನಗಳಿದ ಸಹ ಕಾರ್ಯಕರ್ತ ಖಲಂದರ್ ಮಾಂಬ್ಳಿ ಇವರ ಹೆಸರಿನಲ್ಲಿ ತಹ್ಲೀಲ್ ಸಮರ್ಪನೆ  ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಕಯಬು ಕೇನಾಜೆಯವರ ಮನೆಯಲ್ಲಿ ನಡಯಿತು.ಪ್ರಸ್ತುತ ಕಾರ್ಯಕ್ರಮವನ್ನು ಅಬ್ಬಾಸ್ ಎ.ಬಿ ಸ್ವಾಗತಿಸಿದರು. ರಿಫಾಯಿ ಮೌಲೀದ್ ಗೆ ಹಾರಿಸ್ ಮಿಸ್ಬಾಹಿ ಪೈಬಾಂಚ್ಚಾಲ್ ಉಸ್ತಾದರು ನೇತೃತ್ವವಹಿಸಿ ಅನುಸ್ಮರಣಾ ಪ್ರಭಾಷಣಗೈದರು.ಪ್ರಸ್ತುತ ಕಾರ್ಯಕ್ರಮದಲ್ಲಿ  SYS ಮತ್ತು SSF ನೇತಾರರುಹಾಗು ಕಾರ್ಯಕರ್ತರಿಗು ಊರಿನ ಹಾಗು ಪರ ಊರಿನ ಮಹನೀಯರಿಗು, ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು

SSF ಇರುವಂಬಳ್ಳ ಶಾಖೆ