Saturday, 14 January 2017

ಜನವರಿ 22ಕ್ಕೆ ಕಬೀರ್ ಹಿಮಮಿ ಸಖಾಫಿ ಗೋಳಿಯಡ್ಕ ಇರುವಂಬಳ್ಳದಲ್ಲಿ

ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ ಫೆಡರೇಶನ್ SSF ಇರುವಂಬಳ್ಳ ಶಾಖೆ ಹಾಗು
ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ SYS ಇರುವಂಬಳ್ಳ ಬ್ರಾಂಚ್ ಇದರ ವತಿಯಿಂದ ಮದ್ಹುರಸೂಲ್ ಪ್ರಭಾಷಣ ಹಾಗು ತಾಜುಲ್ ಉಲಾಮ ನೂರುಲ್ ಉಲಾಮ ಅನುಸ್ಮರಣೆ ಕಾರ್ಯಕ್ರಮವು ದಿನಾಂಕ ಜನವರಿ 22 ಕ್ಕೆ ಇರುವಂಬಳ್ಳ ತಾಜುಲ್ ಉಲಮಾ ನಗರದಲ್ಲಿ ನಡೆಯಲಿದೆ.
ಬೀರಾನ್ ಹಾಜಿ ರವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕುಂಞಿ ಕೋಯ ತಂಙಲ್ ಸಅದಿ ಸುಳ್ಯ ದುವಾ ಹಾಗು ಉದ್ಘಾಟನೆಗೈಯಲಿದ್ದಾರೆ.
ಸಂಜೆ 6 ಘಂಟೆಗೆ ಸರಿಯಾಗಿ ಮೌಲೀದ್ ಪಾರಾಯನ ಕಾರ್ಯಕ್ರಮ ನೆಡಯಲಿದೆ.
ಕಬೀರ್ ಹಿಮಮಿ ಸಖಾಫಿ ಮುಖ್ಯ ಪ್ರಭಾಷಣಗೈಯಲಿದ್ದಾರೆ.ಕೊನೆಯಲ್ಲಿ ಎಲ್ಲರಿಗು ತಬರ್ರುಕ್ ವಿತರಣೆ ನೆಡಯಲಿದೆ.

No comments: