Monday, 14 August 2017

ಎಸ್ಸೆಸ್ಸಪ್ ಇರುವಂಬಳ್ಳ ಶಾಖೆ ವತಿಯಿಂದ ಸ್ವಾತಂತ್ರೂತ್ಸವ ಹಾಗು ಸ್ನೇಹ ಸಂಗಮ



ಎಸ್ಸೆಸ್ಸಪ್ ಇರುವಂಬಳ್ಳ ಶಾಖಾ ವತಿಯಿಂದ ಸ್ವಾತಂತ್ರೂತ್ಸವ ಹಾಗು ಸ್ನೇಹ ಸಂಗಮ ಕಾರ್ಯಕ್ರಮವು ಇಂದು ಬೆಳಿಗ್ಗೆ ತಾಜುಲ್ ಉಲಮಾ ನಗರ ಇರುವಂಬಳ್ಳದಲ್ಲಿ ನಡೆಯಿತು. ದ್ವಜಾರೋಹಣವನ್ನು ಅಜ್ಜಾವರ ಪಂಚಾಯತಿ ನಿಕಟ ಪೂರ್ವ ಅಧ್ಯಕ್ಷರಾದ ಕರುಣಾಕರ  ಅಡ್ಪಂಗಾಯ ನರವೇರಿಸಿದರು. ನಂತರ ಶಾಖಾ ಅಧ್ಯಕ್ಷರಾದ ಕಾದರ್ ಬಿ.ಎಂ ರವರ ಅಧ್ಯಕ್ಷತೆಯಲ್ಲಿ ನಡೆದ ಸ್ನೇಹ ಸಂಗಮ ಕಾರ್ಯಕ್ರಮವನ್ನು ಹೆಮನಾಥ ಪೂಜಾರಿ ಮೈತ್ತಡ್ಕ ಉಧ್ಘಾಟಿಸಿದರು.
ಸಂದೇಶ ಭಾಷನವನ್ನು ಎಸ್ಸಸ್ಸಪ್ ಸುಳ್ಯ ಡಿವಿಷನ್ ಕಾರ್ಯದರ್ಶಿ ಅಬ್ಬಾಸ್ ಎ.ಬಿ ನಿರ್ವಹಿಸಿದರು. ಇರುವಂಬಳ್ಳ ಜಮಾಅತ್ ಅಧ್ಯಕ್ಷರಾದ ಅಬೂಬಕರ್ ಐ.ಎಂ, ಎಸ್.ವೈ.ಎಸ್ ಸುಳ್ಯ ಸೆಂಟರ್ ಸದಸ್ಯರಾದ ಕಯಬು ಕೇನಾಜೆ,   ಮೊದಲಾದವರು ಶುಭಾರೈಸಿ ಮಾತನಾಡಿದರು.
ಮಹ್ಶೂಕ್ ಎಲ್ಲರನ್ನು ಸ್ವಾಗತಿಸಿ ಯಾಹ್ಯ ಜಿ.ಎ ವಂದಿಸಿದರು. ಅಂದುಞಿ ಗೊರಡ್ಕ ಕಾರ್ಯಕ್ರಮವನ್ನು ನಿರೂಪಿಸಿದರು